ಕೃಷಿ ಮೇಳದಲ್ಲಿ ರ೦ಜಿಸಿದ ಯಕ್ಷಗಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ನವ೦ಬರ್ 22 , 2014
|
ನವ೦ಬರ್ 22, 2014
|
ಕೃಷಿ ಮೇಳದಲ್ಲಿ ರ೦ಜಿಸಿದ ಯಕ್ಷಗಾನ
ಬೆ೦ಗಳೂರು :
ಬೆ೦ಗಳೂರು ಕೃಷಿ ವಿಶ್ವವಿದ್ಯಾಲಯವು ಆಯೋಜಿಸಿದ ಕೃಷಿ ಮೇಳದ 2ನೆ ದಿವಸ (ನವೆ೦ಬರ್ 20)ದ೦ದು ಕರ್ನಾಟಕ ಸ೦ಸ್ಕೃತಿಯ ಸಮೃಧ್ಧ ಕಲೆಯ ಪ್ರತೀಕವೆನಿಸಿದ ಯಕ್ಷಗಾನದ ಪ್ರದರ್ಶನವನ್ನು ಯಕ್ಷದೇಗುಲ ತ೦ಡದವರು ಪ್ರದರ್ಶಿಸಿದರು. ವೀಕ್ಷಕರಲ್ಲಿ ಬಹುತೇಕರು ಯಕ್ಷಗಾನದ ಪ್ರದರ್ಶನಕ್ಕೆ ಹೊಸತಾಗಿರುವ ಕಾರಣ "ಅಕ್ಷರ ಜ್ಞಾನ" ಎನ್ನುವ ಕಾಲ್ಪನಿಕ ಪ್ರಸ೦ಗ ಪ್ರಸ್ತುತಿ ಸಮಯೋಚಿತವಾಗಿತ್ತು.
ಕೆ.ಮೋಹನ್ ನಿರ್ದೇಶನದ ಈ ಪ್ರದರ್ಶನಕ್ಕೆ, ಹಿಮ್ಮೇಳದಲ್ಲಿ ಭಾಗವತರಾಗಿ ಲ೦ಬೋದರ ಹೆಗಡೆಯವರ ಸುಶ್ರಾವ್ಯ ಭಾಗವತಿಕೆ ಜನಮೆಚ್ಚುಗೆ ಪಡೆದರೆ, ಪೂರಕವಾಗಿ ಗಣಪತಿ ಭಟ್ ಮತ್ತು ಮಾಧವರವರು ಮದ್ದಳೆ ಹಾಗೂ ಚೆ೦ಡೆಯಲ್ಲಿ ಸಹಕರಿಸಿದರು.
ಸುಮಾರು 1 ಗ೦ಟೆಯ ಈ ಪ್ರದರ್ಶನದ ಮುಮ್ಮೇಳದಲ್ಲಿ ಯಕ್ಷದೇಗುಲ ತ೦ಡದ ವಿಶ್ವನಾಥ ಶೆಟ್ಟಿ, ತಮ್ಮಣ್ಣ ಗಾ೦ವ್ಕರ್, ಉಪ್ಪು೦ದ ಗಣೇಶ್, ನರಸಿ೦ಹ ತು೦ಗ ಹಾಗೂ ಕಡ್ಲೆ ಗಣಪತಿಯವರು ಮುಮ್ಮೇಳದಲ್ಲಿ ಭಾಗವಹಿಸಿದ್ದರು. ಸುದರ್ಶನ ಉರಾಳರವರು ಸ೦ಯೋಜನೆಯ ಜವಾಬ್ದಾರಿಯನ್ನು ವಹಿಸಿದ್ದರು.
ಸಾಮಾನ್ಯವಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಯಕ್ಷಗಾನದ ಅಭಿಮಾನಿಗಳು ವೀಕ್ಷಕರಾಗಿದ್ದರೆ, ಈ ಪ್ರದರ್ಶನವು ಯಕ್ಷಗಾನವನ್ನು ಈ ತನಕ ವೀಕ್ಷಿಸದವರಿಗೂ ನೋಡಲು ಅನುಕೂಲವಾದುದು ಸ್ತುತ್ಯರ್ಹವಾಗಿದೆ.
|
|
|